( 4 Oct, 2015) ಭಾರತ ರತ್ನ ಪ್ರಶಸ್ತಿ Published By : upscgk.com ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಗಾಂಧೀಜಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು. ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ 1990 ರಲ್ಲಿ ಮತ್ತು ಖಾನ್ ಅಬ್ದುಲ್ ಗಫರ್ ಖಾನ್. 1987 ರಲ್ಲಿ. ಮದರ್ ಥೆರೆಸಾರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಿ 1980 ರಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಇಲ್ಲಿಯವರೆಗೆ 2013 ವರೆಗೆ 43 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಮೊದಲ ಪ್ರಶಸ್ತಿ ವಿಜೇತ ವಿದೇಶಿ ವ್ಯಕ್ತಿ ಖಾನ್ ಅಬ್ದುಲ್ ಗಫರ್ ಖಾನ್ 1987 ರಲ್ಲಿ. (ಪಾಕಿಸ್ತಾನದ ಪ್ರಜೆ, ಭಾರತ ಸ್ವತಂತ್ರ ಪಡೆಯುವ ಮುಂಚೆ ಭಾರತೀಯ ಪ್ರಜೆಯಾಗಿದ್ದ. ಭಾರತ ರತ್ನ ಪ್ರಶಸ್ತಿ ಏಕೈಕ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾ.1992 ರಲ್ಲಿ. ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಕಿರಿಯ ವ್ಯಕ್ತಿ ಸಚಿನ ತೆಂಡೂಲ್ಕರ್ (43 ನೇ ವಯಸ್ಸಿನಲ್ಲಿ 2013 ರಲ್ಲಿ) ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಗುಲ್ಜಾರಿಲಾಲ್ ನಂದಾ (99 ನೇ ವಯಸ್ಸಿನಲ್ಲಿ 1997 ರಲ್ಲಿ) ಭಾರತ ರತ್ನ ಪ್ರಶಸ್ತಿ ವಿಜೇತ ಕರ್ನಾಟಕದವರು ಸರ್,ಎಮ್,ವಿಶ್ವೇಶ್ವರಯ್ಯ (1955), ಭೀಮಶೇನ ಜೋಷಿ (2008), ಸಿ,ಎನ್,ರಾವ್ (2013) ಪ್ರಶಸ್ತಿ ವಿಜೇತ ಮೊದಲ ಮಹಿಳೆ ಇಂದಿರಾಗಾಂಧಿ (1971) ಭಾರತದ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಮುರಾರ್ಜಿ ದೇಸಾಯಿ, (1991 ರಲ್ಲಿ ಪ್ರಶಸ್ತಿ ವಿಜೇತರಾದರು) ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನಿಗಳು ಜವಾಹರ್ ಲಾಲ್ ನೆಹರೂ (1955) ಇಂದಿರಾ ಗಾಂಧಿ (1971) ರಾಜೀವ ಗಾಂಧಿ (1991) ಮೊರಾರ್ಜಿ ದೇಸಾಯಿ (1991) ಗುಲ್ಜಾರಿಲಾಲ್ ನಂದಾ (1997) ಪ್ರಶಸ್ತಿ ವಿಜೇತ ರಾಷ್ಟ್ರಪತಿಗಳು :- ಸರ್ವಪಳ್ಳಿ ರಾದಾಕೃಷ್ಣನ್(1954) ಬಾಬು ರಾಜೇಂದ್ರ ಪ್ರಸಾದ (1962) ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997) ಪ್ರಶಸ್ತಿ ಪಡೆದು ರಾಷ್ಟ್ರಪತಿಯಾದವರು :- ಸರ್ವಪಳ್ಳಿ ರಾದಾಕೃಷ್ಣನ್(1954) ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997) ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಪಡೆದವರು :- ಡಾ. ಚಂದ್ರಶೇಖರ್ ವೆಂಕಟರಾಮನ್, ಮದರ್ ತೆರೆಸಾ, ಅಮರ್ತ್ಯ ಸೇನ್. ಪ್ರಶಸ್ತಿ ಪಡೆದ ಮೊದಲ ನಟ :-ಜಿ ರಾಮಚಂದ್ರನ್ 2014 ರಲ್ಲಿ ಪ್ರಶಸ್ತಿ ವಿಜೇತರು :- ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ ಮೋಹನ್ ಮಾಳವಿಯ(ಮರೋಣತ್ತರವಾಗಿ) ಪ್ರಶಸ್ತಿ ವಿಜೇತರಿಗೆ ದೊರೆಯುವ ಸೌಲಭ್ಯಗಳು