( 4 Oct, 2015) ಭಾರತದ ಇತಿಹಾಸ Published By : upscgk.com ಸಂಗಂ ಕಾಲದ ಆಡಳಿತ :- ರಾಜ್ಯದ ಆಡಳಿತದ ಕೇಂದ್ರ ಬಿಂದು - ಅರಸ ರಾಜ ಪದವಿ - ವಂಶ ಪಾರಂಪರ್ಯವಾಗಿತ್ತು . ರಾಜರನ್ನು ದೈವಾಂಶ ಸಂಭೂತನೆಂದು ನಂಬಿದ್ದರು . ರಾಜಕೀಯದಲ್ಲಿ ಅರಸನಿಗಿದ್ದ ಸಲಹಾ ಸಮಿತಿಗಳು - ಎಂಪೆರುಕುಳು ಹಾಗೂ ಎನ್ ಪೆರಾಯಮ್ . ರಾಯಭಾರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಧೂತರು . ಗೂಢಾಚರರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬರ್ರರ್ . ರಾಜ್ಯವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು ,- ಮಂಜಲಮ್ ಪ್ರಾಂತ್ಯಗಳನ್ನು - ನಾಡುಗಳಾಗಿ ವಿಂಗಡಿಸಲಾಗಿತ್ತು . ನಾಡುಗಳನ್ನ - ಹಳ್ಳಿಗಳಾಗಿ ಮತ್ತು ಪಟ್ಟಣಗಳಾಗಿ ವಿಬಾಗಿಸಲಾಗಿತ್ತು . ಹಳ್ಳಿಗನ್ನ ಈ ರೀತಿ ವಿಭಾಗಿಸಲಾಗಿತ್ತು - “ ಸಿರೂರ್ ಮತ್ತು ಪೆರೂರ್ “ ಹಳ್ಳಿಯ ಗ್ರಾಮ ಸಭೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಅವೈ “ ಹಳ್ಳಿಯ ಆಗು ಹೋಗುಗಳನ್ನ ನೋಡಿಕೊಳ್ಳುತ್ತಿದ್ದ ಸಂಸ್ಥೆಗಳು - ಮನ್ರಾಂ ಮತ್ತು ಪೊಡಿಯಲ್ ಸೈನ್ಯವನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಪಪೈ “ ಸೇನಾಧಿಪತಿಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ತಾನೈತ್ ತಲೈವನ್ ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಿಗೆ ಸವಿ ನೆನಪಿಗಾಗಿ ನೆಡುತ್ತಿದ್ದ ಸ್ಮಾರಕಗಳು - ವೀರಕಲ್ಲು ಮತ್ತು ನೆಡುಕಲ್ ಸಂಗಂ ಯುಗದ ಜರನ ಆದಾಯದ ಮೂಲ - ಭೂಕಂದಾಯ ಹಾಗೂ ವ್ಯಾಪಾರ ಭೂತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - “ ಕರೈ “ ಪಾಂಡ್ಯರ ರಾಜ್ಯವನ್ನು ಆಳುತ್ತಿದ್ದ ರಾಣಿ - ಪಾಂಡೈಯಾ ಚೋಳರ ಕಾಲದಲ್ಲಿ ನ್ಯಾಯ ತೀರ್ಮಾನಕ್ಕೆ ಖ್ಯಾತಿ ಪಡೆದಿದ್ದ ಸ್ಥಳ - ಉರೈಯೂಲ್ . ರೈತರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವೆಳ್ಳಾರರು . ಸಂಗಂ ಕಾಲದಲ್ಲಿ ಕೃಷಿಗೆ ವರದಾನವಾಗಿ ಶ್ರಮಿಸಿದ ನದಿಗಳು - ಪೆಣ್ಣಾರ್ , ಪಾಲಾರ್ , ಕಾವೇರಿ ಮತ್ತು ತಾಮ್ರ ಪರ್ಣಿ . ಚೇರ ದೇಶ ಈ ಹಣ್ಣಿಗೆ ಹೆಸರು ವಾಸಿಯಾಗಿತ್ತು - ಹಲಸು ಸಂಗಂ ಕಾಲದಲ್ಲಿ ಹತ್ತಿ ಬಟ್ಟೆಗೆ ಹೆಸರಾದ ಸ್ಥಳ - ಉರೈಯೂರು ಪಾಂಡ್ಯರ ಪ್ರಮುಖ ಬಂದರು - ಸಲಿಯೂರ್ ಚೋಳರ ಪ್ರಮುಖ ಬಂದರು - ಪುಹಾರ್ . ಎತ್ತರದ ಬೆಳಕಿನ ಮನೆ ಈ ಬಂದರಿನಲ್ಲಿತ್ತು - ನಿರ್ಪೆಯರ್ಕು . ಮಾರುಕಟ್ಟೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ಅವಣಂ ಮಾರುಕಟ್ಟೆಯ ವಿಧಗಳು - ಮಾಳಂಗಾಟಿ ಹಾಗೂ ಅಲ್ಲಂಗಾಡಿ ಬೆಳಗಿನ ಮಾರುಕಟ್ಟೆಯ ಹೆಸರು - ಮಾಳಂಗಾಡಿ ಸಂಜೆಯ ಮಾರುಕಟ್ಟೆಯ ಹೆಸರು - ಅಲ್ಲಂಗಾಡಿ ಬಾರತದಿಂದ ರಪ್ತಾಗುತ್ತಿದ್ದ ಮಲ್ಸನ್ ಗಳನ್ನು ಪ್ಲೀನಿ - ನೆಯ್ದ ಬಲೆಗಳು ಎಂದು ಕರೆದಿದ್ದಾರೆ . ಮೆಣಸನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದ ಗ್ರೀಕರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಯವನ ಪ್ರಿಯರು ಸಂಗಂ ಕಾಲದ ನಾಣ್ಯಗಳು - ನಿಷ್ಕ , ಫಲ , ಸುವರ್ಣ ( ಬಂಗಾರದ ನಾಣ್ಯ ) ಕಾಕಿನಿ ( ತಾಮ್ರದ ನಾಣ್ಯ ) ಹಾಗೂ ಶತಮಾನ ( ಬೆಳ್ಳಿ ನಾಣ್ಯ ) . ಸಂಗಂ ಸಮಾಜದಲ್ಲಿ ಬ್ರಾಹ್ಮಣರನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಂದಣರ್ ಸಂಗಂ ಯುಗದ ಪ್ರಸಿದ್ಧ ಕವಯಿತ್ರಿಗಳು - ಅಮ್ಟೆ ಮತ್ತು ನೆಚ್ಚಿಲ್ಲಿಯರ್ ಸಂಗಂ ಸಮಾಜದ ಜನರನ್ನು ಕೇಶಾಲಂಕಾರವನ್ನು ಈ ಹೆಸರಿನಿಂದ ಕರೆಯತ್ತಿದ್ದರು - ಇಂಪಾಲ್ . ಸಂಗಂ ಜನರ ರುಚಿಕರವಾದ ಆಹಾರ - ಪೊಂಗಲ್ ಸಂಗಂ ಸಮಾಜದಲ್ಲಿ ಚಿತ್ರಕಲೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಇಯಾಮ್ . ಸಂಗಂ ಜನರ ಪ್ರಮುಖ ಧಾರ್ಮಿಕ ಪದ್ಧತಿ - ಶಿವಾರಾಧನೆ , ಮಾತೃ ದೇವತಾರಾಧನೆ ಮತ್ತು ಲಿಂಗಾರಾಧನೆ , ಸಂಗಂ ಯುಗದ ಮುಖ್ಯ ದೇವರು - ಮುರುಗನ್ . ಮುರುಗನನ್ನು ತೃಪ್ತಿಪಡಿಸಲು ನಡೆಯುತ್ತಿದ್ದ ನೃತ್ಯ - ವೆಲಂಡಾಲ್ . ಮಧರೈಯಲ್ಲಿ ಏಪ್ರಿಲ್ ತಿಂಗಳ ಕೊನೆಯಲ್ಲಿ ಆಚರಿಸುತ್ತಿದ್ದ ಉತ್ಸವ - ಕಾಮನ ಉತ್ಸವ ಸಂಗಂ ಜನರು ದೇವಾಲಯಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕೋಯಿಲ್ ಸಂಗಂ ಜನರ ಆರಂಭ ಕಾಲದ ಪೂಜೆ - ಪತ್ತಿನಿ ( ಪರಿಶುದ್ಧ ಸ್ತ್ರೀಪೂಜೆ ) ಸಂಗಂ ಕಾಲದಲ್ಲಿ ಬೌದ್ಧಧರ್ಮದ ಕೇಂದ್ರಗಳು - ನಾಗಪಟ್ಟಣಂ , ಕಾಂಜಿವರಂ ಹಾಗೂ ಮಧುರೈ. ಜೈನ ಧರ್ಮದ ಪ್ರಮುಖ ಕೇಂದ್ರ - ಮಧುರೈ ಸಂಗಂ ಸಾಹಿತ್ಯ :- ಸಾಹಿತ್ಯದ ದೃಷ್ಠಿಯಿಂದ ಸಂಗಂ ಯುಗವನ್ನು ಈ ಹೆಸರಿನಿಂದ ಕರೆಯಲಾಗಿದೆ “ ಅಗಸ್ಟಸ್ ಯುಗ “ . “ ಅಗಸ್ಟಸ್ ಯುಗ “ ಎಂದು ಕರೆದವರು - ಡಾ. ವಿ.ಎ.ಸ್ಮಿತ್ ಸಂಗಂ ಯುಗದಲ್ಲಿ “ ಪ್ರೆಂಚ್ ಅಕಾಡೆಮಿ “ ಗಳಂತೆ ಕಾರ್ಯನಿರ್ವಹಿಸುತ್ತಿದ್ದವು - ಸಂಗಂ ಕೂಟಗಳು . ಪಾಂಡ್ಯರ ಕಾಲದ ಪ್ರಥಮ ಸಂಗಂ ಅಥವಾ ತಲೈ ಸಂಗಂ ಸ್ಥಾಪನೆಯಾದ ಸ್ಥಳ - ತೀನ್ ಮಧುರೈ . ಪ್ರಥಮ ಸಂಗಂನ ಅಧ್ಯಕ್ಷ - ಅಗಸ್ತ್ಯ . ಎರಡನೇ ಸಂಗಂ ಅಥವಾ ನಡುಸಂಗಂನ ಸ್ಥಾಪಿತವಾದ ಸ್ಥಳ - ಕಟಕಾಪುರ . ಎರಡನೇ ಸಂಗಂನ ಅಧ್ಯಕ್ಷ - ಅಗತ್ತಿಯರ್ರ . ಅತ್ಯಂತ ಪ್ರಾಚೀನ ತಮಿಳು ವ್ಯಾಕರಣ ಗ್ರಂಥ - ತೋಲ್ಯಪ್ಪಿಯಂ ತೋಳಪ್ಪಿಯಂ ವ್ಯಾಕರಣ ಗ್ರಂಥದ ಕರ್ತೃ - ತೊಲ್ ಕಪ್ಪಿಯಲ್ ಮೂರನೇ ಸಂಗಂನ ಅಥವಾ ಕವೈ ಸಂಗಂ ಸ್ಥಾಪನೆಯಾದ ಸ್ಥಳ - ಮಧುರೈ . ಮೂರನೇ ಸಂಗಂನಲ್ಲಿ ಅಥಾವ ಕಡೆಯ ಸಂಗಂನ ಅಧ್ಯಕ್ಷ - ನಕ್ಕಿರರ್ ಮೂರನೇ ಸಂಗಂನಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು - ಪತ್ತುಪಾಟ್ಟು , ಎಟ್ಟುತೊಗೈ , ಪದಿನೇಲ್ ಕೀಲ್ ಕರಣ ಕುಲ್ ಪ್ರಾಚೀನ ತಮಿಳರ ಸಾಮಾಜಿಕ ಹಾಗೂ ಧಾರ್ಮಿಕ ಚರಿತ್ರೆಯನ್ನು ಒಳಗೊಂಡ ಆಧಾರ ಗ್ರಂಥ - ಎಟ್ಟುತ್ತೊಗೈ . ತಿರುಕುರಳ್ ಕೃತಿಯ ಕರ್ತೃ “ ತಿರುವಳ್ಳುವರ್ “ ಶಿಲಾಪ್ಪಾದಿಕರಂ ಕೃತಿಯ ಕರ್ತೃ “ ಇಳಂಗೋ ಅಡಿಗಳ್ “ “ ತಮಿಳು ನಾಡಿನ ಬೈಬಲ್ “ ಎಂದೆ ಪ್ರಸಿದ್ದವಾಗಿರುವ ಗ್ರಂಥ “ ತಿರುಕುರಳ್ “ “ ವೇದಾ ಸಾರವೆಂತಲೂ , ಸಾಸುವೆಯೊಳಗೆ 7 ಕಡಲು ಹುದುಗಿಸಿರುವ ಶ್ರೇಷ್ಠ ಕೃತಿ “ ಎಂದು ಖ್ಯಾತಿಯಾಗಿರುವ ಕೃತಿ - ತಿರುಕುರಳ್ “ಮಣಿ ಮಕೈಲೇ “ ಕೃತಿಯ ಕರ್ತೃ - ಸತ್ತನಾರ್ ( ಚಿತ್ತನೈ ಸತ್ತನಾರ್ ) ಜೀವಿಕ ಚಿಂತಾಮಣಿ ಕೃತಿಯ ಕರ್ತೃ “ ತಿರುತಕ್ಕ ದೇವರ್ “ ( ಜೈನ ಕೃತಿ ) ತಮಿಳು ಸಾಹಿತ್ಯದ ಸುವರ್ಣಯುಗ - ಸಂಗಂ ಯುಗ . Extra Tips :- ಪ್ರಾಚೀನ ತಮಿಳು ಸಾಹಿತ್ಯಕ್ಕೆ ಆಧಾರ - ಸಂಗಂ ವಾಯಜ್ಞಂ ತಮಿಳು ದೇಶದ ಮೇಲೆ ಪ್ರಪ್ರಥಮವಾಗಿ ಸಾರ್ವಭೌಮತ್ವ ಸಾಧಿಸಿದ ಚೋಳರಾಜ - ಕುಕಾಲ ಚೋಳನ್ . ಮಲಬಾರ್ ತೀರದಲ್ಲಿ ಚೇರ ಸೈರ್ವಭೌಮತ್ವವನ್ನು ನೆಲೆಗೊಳಿಸಿದ ರಾಜ - ನೆಡು ಚೇರನ್ ಆಂಡಾನ್ . ಉತ್ತರ ಭಾರತದ ಗಂಗಾನದಿ ಪ್ರಾಂತ್ಯದವರೆಗೆ ಚೈತ್ರ ಯಾತ್ರೆ ನಡೆಸಿದ ರಾಜ - ಸೆಂಗುಟ್ಟು ವಾನ್ . “ ಪರಮೇಶ್ವರ “ ಎಂಬ ಬಿರುದು ಧರಿಸಿದ್ದ ಪಾಂಡ್ಯ ಅರಸ - ನೆಡುಂ ಚೆಳಿಯನ್ “ ತಿರುಮೂರು ಕಡುಪುಡಯ್ “ ಕೃತಿಯ ಕರ್ತೃ - ನಕ್ಕಿರರ್. ಕ್ರಿ.ಪೂ.ಎರಡನೇ ಶತಮಾನದಲ್ಲಿ ತಮಿಳು ಭಾಷೆಗೆ ಬಳಸಿದ ಲಿಪಿ - ಬ್ರಾಹ್ಮಿ. ಸಂಗಂ ಯುಗದಲ್ಲಿ ಮುಖ್ಯ ಉಧ್ಯಮ - ವಸ್ತ್ರ ಉದ್ಯಮ . ಕರಿಕಾಳ ಚೋಳನ ವಿಜಯಗಳನ್ನ ವಿವರಿಸಿದ ಗ್ರಂಥ - ಪಟ್ಟಿನ ಪಾಲೈ . ಕನ್ನಗಿ ದೇವಾಲಯದ ಪ್ರಾರಂಭೋತ್ಸವಕ್ಕೆ ಆಗಮಿಸಿದ ಸಿಂಹಳದ ರಾಜ - ಗಜ ಬಾಹು ಲಲಿತ ಕಲೆಗಳ ಕುರಿತು ಬೆಳಕು ಚೆಲ್ಲುವ ತಮಿಳು ಕೃತಿ - ಮಣಿಮೇಖಲೈ . ಸಂಗರ್ ಕೊಲಾಂಡಿಯಾ ಪದದ ಅರ್ಥ - ವರ್ತಕ ಶಾಕೆಗಳು . “ ಮಧುರೈ ಕಂಜಿ “ ಕೃತಿಯ ಕರ್ತೃ - ಮಾಗುಂಡಿ ಮರುಧನ್. ಸಂಗಂ ಯುಗದಲ್ಲಿ ಜಾರಿಯಲ್ಲಿದ್ದ ಜಾತಿ ವ್ಯವಸ್ಥೆ ಯನ್ನು ಈ ಹೆಸರಿನಿಂದ ಕರೆಯುವರು - ತುಡಿಯನ್. ಸಂಗಂ ಯುಗದಲ್ಲಿ ರಾಜನ ಆಸ್ಥಾನವನ್ನು ಈ ಹೆಸರಿನಿಂದ ಕರೆಯುವರು - ಮನ್ನಂ. ತೊಂಟಿ,ಮುರಿಜನ್ ಬಂದರು ಪಟ್ಟಣಗಳು ಈ ಸಂಗಂ ರಾಜ್ಯದಲ್ಲಿದ್ದವು - ಚೇರನ್ ಪಾಂಡ್ಯರ ರಾಜಧಾನಿ ಮಧುರೈ ಈ ನದಿಯ ದಂಡೆಯಲ್ಲಿದೇ - ವೈಗೈ ನದಿ . ಈ ಮಾರ್ಗದ ಮೂಲಕ ಭಾರತ ಈಜಿಪ್ಟ್ ನೊಂದಿಗೆ ವ್ಯಾಪಾರ ಸಂಬಂಧಗಳನ್ನು ನಡೆಸುತ್ತಿತ್ತು -ಕೆಂಪು ಸಮುದ್ರ ಮಾರ್ಗ . ಕರಿಕಾಳ ಚೋಳನ ತಂದೆಯ ಹೆಸರು - ಇಲಾಂಜಿತ್ ಸೇನಿ. ಸಂಗಂ ಯುಗದಲ್ಲಿ ಗೆಲುವಿನ ದೇವತೆಯಾಗಿ ಪೂಜಿಸುತ್ತಿದ್ದ ದೇವತೆ - ಕೊರವೈ. ಸಂಗಂ ಯುಗದಲ್ಲಿ ವೆಲ್ವಿ ಪದದ ಅರ್ಥ - ಯಜ್ಞ. ಕೊರಗೈ ಬಂದರು ಈ ನದಿಯ ತೀರದಲ್ಲಿತ್ತು - ತಾಂಬ್ರವರ್ಣಿ . ಕರ್ನಾಟಕ ಪದವನ್ನು ಪರಿಚಯಿಸುವ ತಮಿಳು ಗ್ರಂಥ - ಶಿಲಪ್ಪಾದಿಕಾರಂ ಹಾಗೂ ತೋಳ್ಳಯಿಪ್ಪಿ . ಶಿಲಪ್ಪಾದಿಕಾರಂ ಕರ್ನಾಟಕ ಪದವನ್ನು ಈ ಹೆಸರಿನಿಂದ ಪರಿಚಯಿಸಿದೆ - ಕರುನಾಡರ್ . ವೆಳ್ವಕುಡಿ ತಾಮ್ರ ಶಾಸನದ ಕರ್ತೃ - ಪರಾಂತಕ ಚೋಳ . ಚೋಳರ ಶಾಸನಗಳು ಕರ್ನಾಟಕ ಪದವನ್ನು ಹೀಗೆ ಸೂಚಿಸಿದೆ - ಕನ್ನಾಟ ಅಥವಾ ಕನ್ನಾಟಕ . “ ಮಧುರೈ ಕೊಂಡ “ ಎಂಬ ಬಿರುದುಳ್ಳ ಅರಸ - ಒಂದನೇ ಪರಾಂತಕ ಚೋಳ .